2024ರ ಭಾರತೀಯ ಚುನಾವಣೆ: ಪತ್ರಕರ್ತರ ಸುರಕ್ಷತಾ ಕಿಟ್

ಜುಲೈ 8, 2023ರಂದು ಕೋಲ್ಕತಾ ಹೊರವಲಯದಲ್ಲಿ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ವೇಳೆ ಮತ ಚಲಾಯಿಲು ಮತಗಟ್ಟೆಯೊಂದರ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿರುವಂತೆಯೇ ಅರೆ ಸೈನಿಕ ಪಡೆಯ ಯೋಧ ಕಾವಲು ಕಾಯುತ್ತಿರುವುದು. (ಎಎಫ್‌ಪಿ/ದಿಬ್ಯಾಂಶು ಸರ್ಕಾರ್)

2024ರಲ್ಲಿ, ಆಳುವ ಭಾರತೀಯ ಜನತಾ ಪಕ್ಷವು ಐದು ವರ್ಷಗಳ ಅವಧಿಗೆ ಸತತ ಮೂರನೇ ಬಾರಿಗೆ ಪುನರಾಯ್ಕೆ ಕೋರುತ್ತಿದೆ. ಮುಂಬರಲಿರುವ ಎಪ್ರಿಲ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ 60 ಕೋಟಿಗೂ ಹೆಚ್ಚಿರುವ ಭಾರತೀಯ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

ಈ ಚುನಾವಣೆಯ ವರದಿ ಮಾಡಲಿರುವ ಪತ್ರಕರ್ತರಿಗಾಗಿ ಸಿಪಿಜೆಯ ತುರ್ತು ಪ್ರತಿಕ್ರಿಯಾ ತಂಡ (ಇಆರ್‌ಟಿ)ವು ಒಂದು ಸುರಕ್ಷತಾ ಕಿಟ್ ಸಿದ್ಧಪಡಿಸಿದೆ. ಈ ಕಿಟ್‌ನಲ್ಲಿ ಸಂಪಾದಕರು, ವರದಿಗಾರರು ಮತ್ತು ಛಾಯಾಗ್ರಾಹಕರಿಗಾಗಿ ಚುನಾವಣೆಗೆ ಹೇಗೆ ಸಿದ್ಧತೆ ನಡೆಸಬೇಕು ಮತ್ತು ಡಿಜಿಟಲ್, ದೈಹಿಕ ಮತ್ತು ಮಾನಸಿಕ ಅಪಾಯಗಳನ್ನು ಹೇಗೆ ಕಡಿಮೆ ಮಾಡಬೇಕು ಎಂಬ ಕುರಿತು ಮಾಹಿತಿಯನ್ನು ಹೊಂದಿದೆ.

ಭಾರತದಲ್ಲಿ ಕಳೆದ ಹಲವು ವರ್ಷಗಳಲ್ಲಿ ವಿಶೇಷವಾಗಿ ಸೂಕ್ಷ್ಮ  ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ಒತ್ತಡ, ಸೆನ್ಸಾರ್‌ಶಿಪ್ ಯತ್ನಗಳು ಮತ್ತು ವರದಿಗಾರಿಕೆಗೆ ಮೀತಿ ಹೇರಿದ ಘಟನೆಗಳು ನಡೆದಿವೆ. ಕಳೆದ ಸಾರ್ವತ್ರಿಕ ಚುನಾವಣೆಯ ಪ್ರವೃತ್ತಿಗಳ ಮತ್ತು ಕಳೆದ ಐದು ವರ್ಷಗಳಲ್ಲಿ, ಸಶಸ್ತ್ರ ಸಂಘರ್ಷ ಮತ್ತು ಸ್ಥಳೀಯ ಘಟನೆಗಳ ಮಾಹಿತಿ ಯೋಜನೆ (Armed Conflict & Location Event Data ProjectACLED)ಯು ಮಾಹಿತಿಗಳು ಪತ್ರಕರ್ತರ ಮೇಲೆ ದೈಹಿಕ ದಾಳಿಗಳು, ಗುಂಪು ಹಿಂಸಾಚಾರ ಮತ್ತು ಹಿಂಸಾತ್ಮಕ ಮತಪ್ರದರ್ಶನಗಳಿಂದ ಉಂಟಾಗುತ್ತಿರುವ, ಹೆಚ್ಚುತ್ತಿರುವ ಅಪಾಯಗಳನ್ನು ಬಹಿರಂಗಪಡಿಸುತ್ತವೆ. ಅದೇ ಹೊತ್ತಿಗೆ ಪತ್ರಕರ್ತರು ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮಗಳ ಟ್ರೋಲಿಂಗ್, ಆನ್‌ಲೈನ್ ಕಿರುಕುಳ, ಸೈಬರ್ ಬೆದರಿಕೆಗಳು ಮತ್ತು ಡಿಜಿಟಲ್ ಕಣ್ಗಾವಲು ಮುಂತಾದವುಗಳನ್ನು ಕೂಡಾ ಅನಿವಾರ್ಯವಾಗಿ ಎದುರಿಸಬೇಕಾಗಿಬಂದಿದೆ. ಈ ಸಂಯೋಜಿತ ದಾಳಿಗಳ ಪರಿಣಾಮವಾಗಿ ಸುದ್ದಿಮನೆಗಳು ಮಾತ್ರವಲ್ಲದೇ ಇಡೀ ಮಾಧ್ಯಮ ರಂಗವೇ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಎದುರಿಸುತ್ತಿವೆ.

ಮೂಲ: Armed Conflict Location & Event Data Project (ACLED); http://www.acleddata.com/

ಎಸಿಎಲ್‌ಇಡಿ (ACLED) ಮಾಹಿತಿ ಕೋಶವು ಘಟನೆಗಳನ್ನು ಆಧರಿಸಿದ ಮಾಹಿತಿ ಕೋಶವಾಗಿದ್ದು,  ರಾಜಕೀಯ ಹಿಂಸಾಚಾರ, ಮತಪ್ರದರ್ಶನಗಳ ಮತ್ತು ಜಗತ್ತಿನಾದ್ಯಂತದ ಆಯ್ದ ಅಹಿಂಸಾತ್ಮಕ ಬೆಳವಣಿಗೆಗಳ ವಿಂಗಡಿಸಿದ (ವರ್ಗೀಕೃತ) ಮಾಹಿತಿಗಳನ್ನು ಹೊಂದಿದೆ. 
ಎಸಿಎಲ್‌ಇಡಿ ಮಾಹಿತಿಗಳನ್ನು ನೈಜ ಸಮಯದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸಾಪ್ತಾಹಿಕವಾಗಿ ಪ್ರಕಟಿಸಲಾಗುತ್ತದೆ. ಎಸಿಎಲ್‌ಇಡಿ ದತ್ತಾಂಶವು ಘಟನೆಗಳ ನಮೂನೆ (ವಿಧ), ಶಾಮೀಲಾದವರು, ಸ್ಥಳ, ದಿನಾಂಕ ಮತ್ತು ಈ ಘಟನೆಗಳ ಇತರ ಗುಣಲಕ್ಷಣಗಳ ಕುರಿತು ವಿವರ ನೀಡುತ್ತದೆ. ಎಸಿಎಲ್‌ಇಡಿಯ ಕಾರ್ಯವಿಧಾನ ಅಥವಾ ಮೆಥಡಾಲಜಿಯ ವಿವರವಾದ ಮಾಹಿತಿ ತಿಳಿಯಲು ಎಸಿಎಲ್‌ಇಡಿಯ ಕೋಡ್‌ಬುಕ್ ನೋಡಿ.

ದತ್ತಾಂಶ ದೃಶ್ಯೀಕರಣ (data visualization) ಕುರಿತ ಹಿನ್ನೆಲೆ ವಿವರಣೆ ಕುಣಾಲ್ ಮುಜುಮ್ದಾರ್

ಮೂಲ: Armed Conflict Location & Event Data Project (ACLED); http://www.acleddata.com/www.acleddata.com

ಎಸಿಎಲ್‌ಇಡಿ ದತ್ತಾಂಶವು 2019ರ ಸಾರ್ವತ್ರಿಕ  ಚುನಾವಣೆಗಳಿಗೆ ಬರುತ್ತಾ, ವಿಶೇಷವಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ದೈಹಿಕ ಹಿಂಸಾಚಾರದಲ್ಲಿ ತೀವ್ರ ಹೆಚ್ಚಳವನ್ನು ಎತ್ತಿತೋರಿಸುತ್ತದೆ. ಅದೇ ಹೊತ್ತಿಗೆ ಸಿಪಿಜೆಯ ದಾಖಲೀಕರಣ ಮತ್ತು ಆ ಸಮಯದ ಮಾಧ್ಯಮ ವರದಿಗಳು ಪತ್ರಕರ್ತರ ಮೇಲಿನ ದೈಹಿಕ ದಾಳಿಗಳು ಮತ್ತು ಬೆದರಿಕೆಗಳಲ್ಲಿಯೂ ಹೆಚ್ಚಳವಾಗಿರುವುದನ್ನು ಸೂಚಿಸುತ್ತವೆ.

ಉದಾಹರಣೆಗೆ ಫೆಬ್ರವರಿ 2019ರಂದು ಭಾರತೀಯ ಜನತಾ ಪಕ್ಷದ ಬೆಂಬಲಿಗರೆನ್ನಲಾದವರು, ಛತ್ತೀಸ್‌ಗಢದಲ್ಲಿ ಪಕ್ಷದ ಕಾರ್ಯಕರ್ತರ ನಡುವಿನ ಹೊಡೆದಾಟದ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಒಬ್ಬರು ಪತ್ರಕರ್ತರ ಮೇಲೆ ಹಲ್ಲೆ  ಮಾಡಿದರು. ಎಪ್ರಿಲ್ 2019ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಂಬಲಿಗರೆಂದು ಹೇಳಿಕೊಂಡವರು ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಖಾಲಿ ಕುರ್ಚಿಗಳ ಚಿತ್ರ ತೆಗೆಯುತ್ತಿದ್ದಾಗ ಪತ್ರಿಕಾ ಛಾಯಾಗ್ರಾಹಕರ ಮೇಲೆ ದಾಳಿ ನಡೆಸಿದರು. 

ಸಿಪಿಜೆ ಮೇ 6, 2019ರಂದು ದಾಖಲಿಸಿರುವಂತೆ ಪಶ್ಚಿಮ ಬಂಗಾಳವು ಪತ್ರಕರ್ತರ ವಿರುದ್ಧ ಹಿಂಸಾಚಾರ ಸೇರಿದಂತೆ ಗಾಬರಿಗೊಳಿಸುವ ಸಂಖ್ಯೆಯಲ್ಲಿ  ಇಂತಹಾ ಘಟನೆಗಳು ನಡೆದವು. ಕೋಲ್ಕತಾದ  ಬರಾಕ್‌ಪುರ್‌ನಲ್ಲಿ ಆಳುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವಣ ಸಂಘರ್ಷವು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಈ ಘಟನೆಗಳ ವರದಿ ಮಾಡುತ್ತಿದ್ದ ಪತ್ರಕರ್ತರು ಅವರ ವಾಹನಗಳಿಗೆ ಕಲ್ಲೆಸೆತವೂ ಸೇರಿದಂತೆ ಗಂಭೀರವಾದ ಬೆದರಿಕೆಗಳನ್ನು ಎದುರಿಸಬೇಕಾಯಿತು. ದುರದೃಷ್ಟವಶಾತ್, ಇಂತಹಾ ಗುರಿ ಮಾಡಿದ ದಾಳಿಗಳು ಅಲ್ಲೊಂದು ಇಲ್ಲೊಂದು ನಡೆದ ಘಟನೆಗಳಾಗಿರಲಿಲ್ಲ. ಅದೇ ದಿನ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ರಾಜಕೀಯ ಘರ್ಷಣೆಗಳು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಗುರಿ ಮಾಡುವುದಕ್ಕೆ ಕಾರಣವಾದವು. 

ಈ ಘಟನೆಗಳು- ಪತ್ರಕರ್ತರು ರಾಜಕೀಯ ಹಿಂಸಾಚಾರದ ಬಲಿಪಶುಗಳಾಗಿ ವಸ್ತುನಿಷ್ಟವಾಗಿ ಮತ್ತು ಮುಕ್ತವಾಗಿ ವರದಿ ಮಾಡುವ ಸಾಮರ್ಥ್ಯವನ್ನೇ ರಾಜಿ ಮಾಡಬೇಕಾದ ಒಂದು ಮತ್ತೆಮತ್ತೆ ಸಂಭವಿಸುವ ಒಂದು ಪೂರ್ವವಿನ್ಯಾಸವನ್ನು ಎತ್ತಿತೋರಿಸುತ್ತದೆ. ಎಸಿಎಲ್‌ಇಡಿ ದತ್ತಾಂಶಗಳ ಪ್ರಕಾರ ನಂತರದ ವರ್ಷಗಳಲ್ಲಿ ಉತ್ತರ ಪ್ರದೇಶ, ಕರ್ನಾಟಕ ಮತ್ತು ಮಣಿಪುರ ಸೇರಿದಂತೆ ಇತರ ಭಾರತೀಯ ರಾಜ್ಯಗಳು ದೈಹಿಕ ಹಿಂಸಾಚಾರದಲ್ಲಿ ಹೆಚ್ಚಳವನ್ನು ಕಂಡಿವೆ. 

ಮೇ 2019ರ ನಂತರದ ಸಿಪಿಜೆ ದಾಖಲೀಕರಣವು ಕೂಡಾ ಈ ರಾಜ್ಯಗಳಲ್ಲಿ ಪತ್ರಕರ್ತರ ವಿರುದ್ಧ ಹಿಂಸಾಚಾರ ಸ್ಥಿರವಾಗಿ ಏರುತ್ತಿರುವುದನ್ನು ಬಯಲುಮಾಡುತ್ತದೆ. 2019ರಿಂದೀಚೆಗೆ ಕೊಲೆಯಾದ 11ಪತ್ರಕರ್ತರಲ್ಲಿ ನಾಲ್ವರ ಕೊಲೆ ಉತ್ತರ ಪ್ರದೇಶದಲ್ಲಿ ನಡೆಯಿತು. ಡಿಸೆಂಬರ್ 2020ರಲ್ಲಿ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಉದ್ರಿಕ್ತ ಗುಂಪೊಂದು ಆ ಪ್ರದೇಶದಲ್ಲಿ ದನಗಳ ಅಕ್ರಮ ಕಸಾಯಿಖಾನೆಗಳು ಇರುವುದರ ಬಗ್ಗೆ ವರದಿ ಮಾಡಿದ್ದಕ್ಕಾಗಿ ಮಹಿಳಾ ಪತ್ರಕರ್ತರೊಬ್ಬರ ಮೇಲೆ ದಾಳಿ ಮಾಡಿತು. ಸೆಪ್ಟೆಂಬರ್ 2021ರಲ್ಲಿ ಮೈಸೂರಿನಲ್ಲಿ ಬಲಪಂಥೀಯ ಪ್ರತಿಭಟನಕಾರರು ತಮ್ಮ ಭಾಷಣವನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದರು. 

ಈ ಪತ್ರಿಕಾ ವೃತ್ತಿ ಸಂಬಂಧಿತ ದಾಳಿಗಳು ಬೆಳೆಯುತ್ತಿರುವ ಪ್ರವೃತ್ತಿಯು ಈ ಕುರಿತು ಹೆಚ್ಚಿನ ಗಮನ ಹರಿಸುವುದನ್ನು ಮತ್ತು ಪತ್ರಿಕೋದ್ಯಮದ ಸಮಗ್ರತೆ ಮತ್ತು ಭದ್ರತೆಗಳನ್ನು ರಕ್ಷಿಸುವ  ಮತ್ತು ವಿಶೇಷವಾಗಿ ರಾಜಕೀಯವಾಗಿ ಉದ್ವಿಗ್ನಗೊಂಡ ವಾತಾವರಣದಲ್ಲಿ ಮಾಹಿತಿಯ ಮುಕ್ತ ಹರಿವನ್ನು ಖಾತರಿಪಡಿಸುವ ಸಕ್ರಿಯ ಕ್ರಮಗಳನ್ನು ಅಗತ್ಯವಾಗಿಸಿದೆ.

ಸುರಕ್ಷತಾ ಕಿಟ್‌ನ ವಿಷಯಗಳು

ಪ್ರತಿಕೂಲ ಸ್ಥಿತಿಯಲ್ಲಿ ವರದಿ ಮಾಡಲು ಸಿಬ್ಬಂದಿಯನ್ನು ನಿಯೋಜಿಸುವಾಗಿನ ಸಂಪಾದಕರ ಸುರಕ್ಷತಾ ಚೆಕ್‌ಲಿಸ್ಟ್

ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಸಂಪಾದಕರು ಮತ್ತು ಸುದ್ದಿಮನೆಗಳು ತತ್ಕಾಲದಲ್ಲಿಯೇ ಪತ್ರಕರ್ತರನ್ನು ಸುದ್ದಿ ಮಾಡಲು ನಿಯೋಜಿಸಬೇಕಾಗುತ್ತದೆ. 

ಅಪಾಯದ ಅಂದಾಜು ಮತ್ತು ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿಪಿಜೆ ಸಂಪನ್ಮೂಲ ಕೇಂದ್ರವನ್ನು ನೋಡಿ.

ಡಿಜಿಟಲ್ ಸುರಕ್ಷೆ: ಮೂಲಭೂತ ವಿಷಯಗಳು

ಆನ್‌ಲೈನ್ ಇರುವಾಗ ಮತ್ತು ಸಾಧನಗಳನ್ನು ಉಪಯೋಗಿಸುತ್ತಿರುವಾಗ ಹೆಚ್ಚು ಸುರಕ್ಷಿತವಾಗಿರಲು ಡಿಜಿಟಲ್ ಸುರಕ್ಷೆಯ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮಹತ್ವದ ವಿಷಯ. ಕೆಳಗಿನವು ಚುನಾವಣೆಯ ವರದಿ ಮಾಡುವ ಪತ್ರಕರ್ತರಿಗಾಗಿ ಕೆಲವು ಅತ್ಯುತ್ತಮ ಅಭ್ಯಾಸಗಳು:

ನಿಮ್ಮ ಅಕೌಂಟ್‌ಗಳನ್ನು ಸುರಕ್ಷಿತವಾಗಿರಿಸಿ
ಫಿಶಿಂಗ್ (phishing)ನಿಂದಉತ್ತಮರಕ್ಷಣೆ

ಹೆಚ್ಚು ವಿವರವಾದ ಮಾಹಿತಿಗಾಗಿ ಸಿಪಿಜೆಯ ಡಿಜಿಟಲ್ ಸುರಕ್ಷಾ ಕಿಟ್ ನೋಡಿ.

ಭಾರತದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ನಂತರ ಮಾರ್ಚ್ 24, 2023ರಂದು ಹೊಸದಿಲ್ಲಿಯ ಅವರ ನಿವಾಸದ ಮುಂದೆ ಪೊಲೀಸರು ಮತ್ತು ಮಾಧ್ಯಮದವರು ನೆರೆದಿರುವುದು. ರಾಯ್ಟರ್ಸ್/ಅನುಶ್ರೀ ಫಡ್ನವೀಸ್

ಡಿಜಿಟಲ್ ಸುರಕ್ಷೆ: ಮೂಲಭೂತ ಸಾಧನ ಸಿದ್ಧತೆ

ಚುನಾವಣೆಯ ವರದಿ ಮಾಡುವಾಗ ಪತ್ರಕರ್ತರು ತಮ್ಮ ವರದಿ ಸಲ್ಲಿಸಲು ಮತ್ತು ಸಹೋದ್ಯೋಗಿಗಳು ಹಾಗೂ ಮೂಲಗಳ ಜೊತೆಗೆ ಸಂಪರ್ಕದಲ್ಲಿರಲು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸು ಸಾಧ್ಯತೆ ಇದೆ. ಪತ್ರಕರ್ತರನ್ನು ವಶಕ್ಕೆ ತೆದುಕೊಂಡರೆ, ಅವರ ಫೋನನ್ನು ವಶಪಡಿಸಿಕೊಂಡರೆ ಅಥವಾ ಅದು ಮುರಿದುಹೋದರೆ ಡಿಜಿಟಲ್ ಸುರಕ್ಷೆಯ ಸಮಸ್ಯೆಗಳು ಉಂಟಾಗಬಹುದು. ಸುದ್ದಿಮನೆಗಳಿಗೆ ದಾಳಿಗಳೂ ಸಂಭವಿಸಿ, ಕಂಪ್ಯೂಟರ್‌, ಮೊಬೈಲ್ ಇತ್ಯಾದಿ ಸಾಧನಗಳನ್ನು ಜಪ್ತಿ ಮಾಡಲಾಗಬಹುದು. ನಿಮ್ಮನ್ನು ಚೆನ್ನಾಗಿ ರಕ್ಷಿಸಿಕೊಳ್ಳಲು:

ಡಿಜಿಟಲ್ ಸುರಕ್ಷೆ: ಸ್ಪೈವೇರ್ ಮತ್ತು ಡಿಜಿಟಲ್ ಕಣ್ಗಾವಲು

ಸಿಟಿಜನ್ ಲ್ಯಾಬ್ ಮತ್ತು ಸಿಪಿಜೆ ಸಂದರ್ಶನಗಳ ಪ್ರಕಾರ  ಪೆಗಾಸಸ್‌ನಂತಹ ಸಂಯೋಜಿತ ಸ್ಪೈವೇರ್ ಅಭಿಮಾನಿಗಳನ್ನು ಭಾರತದ ಪತ್ರಕರ್ತರ ವಿರುದ್ಧ ಬಳಸಲಾಗಿದೆ. ಒಮ್ಮೆ ಅದನ್ನು ನಿಮ್ಮ ಫೋನಿನೊಳಗೆ ಇನ್‌ಸ್ಟಾಲ್ ಮಾಡಲಾದರೆ ಈ ಅತ್ಯಾಧುನಿಕ ಸ್ಪೈವೇರ್- ಎನ್‌ಕ್ರಿಪ್ಟ್ ಮಾಡಲಾದ ಸಂದೇಶಗಳೂ ಸೇರಿದಂತೆ ಎಲ್ಲಾ ಚಟುವಟಿಕೆಗಳ ಕಣ್ಗಾವಲು ಮಾಡಬಲ್ಲದು. ಕಾನೂನಿನ ಅನುಷ್ಟಾನದಲ್ಲಿ ನೆರವಾಗಲು ತಾನು ಈ ಕಣ್ಗಾವಲು ಸಾಧನವನ್ನು ಸರಕಾರಗಳಿಗೆ ಮಾತ್ರವೇ ಮಾರುತ್ತಿರುವುದಾಗಿ ಇಸ್ರೇಲ್ ಮೂಲದ ಎನ್‌ಎಸ್‌ಓ ಗುಂಪು ಹೇಳುತ್ತದೆ. ಒಪ್ಪಂದ ಮುರಿದು ತನ್ನ ಉತ್ಪನ್ನವನ್ನು ದುರುಪಯೋಗ ಮಾಡಿದ ವರದಿಗಳನ್ನು ತಾನು ತನಿಖೆ ಮಾಡುವುದಾಗಿ ಅದು ಸಿಪಿಜೆಗೆ ಮತ್ತೆಮತ್ತೆ ಹೇಳಿದೆ.

ನಿಮ್ಮ ಸಾಧನಗಳನ್ನು ಚೆನ್ನಾಗಿ ರಕ್ಷಿಸಲು ಈ ಕ್ರಮಗಳನ್ನು ಕೈಗೊಳ್ಳಿ:

ನಿಮ್ಮ ಸಾಧನದಲ್ಲಿ ಸ್ಪೈವೇರ್ ಇದೆಯೆಂದು ನಿಮಗೆ ಸಂಶಯವಿದ್ದಲ್ಲಿ:

ನಮ್ಮ ಸಲಹೆ ಸೂಚನೆಯಲ್ಲಿ (advisory) ಪೆಗಾಸಸ್ ಸ್ಪೈವೇರ್ ಬಗ್ಗೆ ಇನ್ನಷ್ಟನ್ನು ಓದಿ.

ಡಿಜಿಟಲ್ ಸುರಕ್ಷೆ: ಇಂಟರ್ನೆಟ್ ಶಟ್‌ಡೌನ್‌ಗಳು

ಚುನಾವಣೆಯ ಸಂದರ್ಭದಲ್ಲಿ ಸಂಪೂರ್ಣ ಅಥವಾ ಭಾಗಶಃ ಇಂಟರ್ನೆಟ್ ಶಟ್‌ಡೌನ್‌ಗಳು ಹೆಚ್ಚುವ ನಿರೀಕ್ಷೆಯಿದೆ. ತಮ್ಮ ಕೆಲಸ ಮಾಡುವ ಪರ್ತಕರ್ತರ ಮೇಲೆ ಇದರಿಂದ ಗಂಭೀರ ಪರಿಣಾಮಗಳು ಆಗಬಹುದು. ಇಂಟರ್ನೆಟ್ ಸಂಪರ್ಕ ಇಲ್ಲದಿರುವುದು ಅಥವಾ ಸೀಮಿತವಾಗಿ ಇರುವುದರ ಆರ್ಥ- ಪತ್ರಕರ್ತರಿಗೆ ತಮ್ಮ ಸುದ್ದಿಮೂಲಗಳನ್ನು ಸಂಪರ್ಕಿಸುವುದು, ದತ್ತಾಂಶಗಳ ಸತ್ಯಾಸತ್ಯತೆಗಳನ್ನು ಚೆಕ್ ಮಾಡುವುದು ಅಥವಾ ತಮ್ಮ ವರದಿಗಳನ್ನು ಸಲ್ಲಿಸುವುದು ಕಷ್ಟವಾಗುತ್ತದೆ ಎಂದು. ಭಾರತದಲ್ಲಿ ಸಂಪೂರ್ಣ ಅಥವಾ ಭಾಗಶಃ ಇಂಟರ್ನೆಟ್ ಶಟ್‌ಡೌನ್‌ಗಳು ಮತ್ತು ಅದರಿಂದ ಮಾಧ್ಯಮಗಳ ಮೇಲಾಗುವ ಪರಿಣಾಮಗಳನ್ನು ಸಿಪಿಜೆ ದಾಖಲಿಸಿದೆ.

ಶಟ್‌ಡೌನ್ ಪರಿಣಾಮಗಳನ್ನು ಸೀಮಿತಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಿ:

ಇಂಟರ್ನೆಟ್ ಶಟ್‌ಡೌನ್ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿಪಿಜೆಯ ಗೈಡ್ ನೋಡಿ.

ಆಗಸ್ಟ್ 6, 2023ರಂದು ಬಂಡಿಪೋರದಲ್ಲಿ ಭಾರತೀಯ ಸೇನೆಯ ಸೈನಿಕ ವಸೀಂ ಆಹ್ಮದ್ ಅವರ ಅಂತ್ಯಕ್ರಿಯೆಯ ವೇಳೆ ಒಬ್ಬ ಗ್ರಾಮಸ್ಥ ಭಾರತೀಯ ಸೈನಿಕರ ಪಕ್ಕದಲ್ಲಿ ನಿಂತು ಮೊಬೈಲ್ ಫೋನಿನಲ್ಲಿ ಫೊಟೋ ತೆಗೆಯುತ್ತಿರುವುದು. ತೌಸೀಫ್ ಮುಸ್ತಫಾ/ಎಎಫ್‌ಪಿ

ಡಿಜಿಟಲ್ ಸುರಕ್ಷೆ: ಆನ್‌ಲೈನ್ ಕಿರುಕುಳ ಮತ್ತು ಗುರಿನಿಗದಿತ ಆನ್‌ಲೈನ್ ಅಭಿಯಾನಗಳು

ಗುರಿನಿಗದಿತ ಆನ್‌ಲೈನ್ ಅಭಿಯಾನಗಳೂ ಸೇರಿದಂತೆ ಆನ್‌ಲೈನ್ ಕಿರುಕುಳಗಳು ಚುನಾವಣೆಗಳ ಸಂದರ್ಭದಲ್ಲಿ ಹೆಚ್ಚಾಗಬಹುದು. ಮಾಧ್ಯಮಗಳಲ್ಲಿ ಕೆಲಸ ಮಾಡುವವರನ್ನು ಹೆಚ್ಚಿನ ಸಮಯಗಳಲ್ಲಿ ಆನ್‌ಲೈನ್ ದಾಳಿಕೋರರು ಪತ್ರಕರ್ತರಿಗೆ ಮತ್ತು ಅವರ ಕೆಲಸಕ್ಕೆ ಅಪಖ್ಯಾತಿ ತರುವ ಸಲುವಾಗಿ ಅವರನ್ನು ಗುರಿ ಮಾಡುತ್ತಾರೆ. ಇದು ಹೆಚ್ಚಾಗಿ ಸಮನ್ವಯಿತ ಕಿರುಕುಳ ಮತ್ತು ಅಪಪ್ರಚಾರ ಅಭಿಯಾನಗಳನ್ನು ಒಳಗೊಂಡಿದ್ದು, ಅವರು ಅನಿವಾರ್ಯವಾಗಿ ಆಫ್‌ಲೈನ್ ಇರುವಂತೆ ಮಾಡಿ ಪತ್ರಕರ್ತರು ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ಮಾಡಲಾಗುತ್ತದೆ. ವಿಶೇಷವಾಗಿ ಮಹಿಳಾ ಪತ್ರಕರ್ತರನ್ನು ಗುರಿ ಮಾಡಲಾಗುತ್ತದೆ ಮತ್ತು ಅವರು ಆನ್‌ಲೈನಲ್ಲಿ ಸ್ತ್ರೀದ್ವೇಷಿ, ಹಿಂಸಾತ್ಮಕ ಲೈಂಗಿಕ ಕಿರುಕುಳಕ್ಕೆ ತುತ್ತಾಗುತ್ತಾರೆ. ಸಿಪಿಜೆ- ಭಾರತದಲ್ಲಿ ಮಹಿಳಾ ಪತ್ರಕರ್ತರನ್ನು ಈ ರೀತಿಯ ಕಿರುಕುಳಕ್ಕೆ ಗುರಿಪಡಿಸಿದಂತಹ ಹಲವಾರು ಪ್ರಕರಣಗಳ ದಾಖಲೀಕರಣ ಮಾಡಿದೆ. ಆನ್‌ಲೈನ್ ದಾಳಿಗಳ ವಿರುದ್ಧ ರಕ್ಷಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ತಮ್ಮನ್ನು ಮತ್ತು ತಮ್ಮ ಖಾತೆಗಳನ್ನು ಹೆಚ್ಚಾಗಿ ರಕ್ಷಿಸಿಕೊಳ್ಳಲು ಕೆಲವು ಕ್ರಮಗಳಿವೆ.

ನಿಮ್ಮನ್ನು ಹೆಚ್ಚು ರಕ್ಷಿಸಿಕೊಳ್ಳಲು:

ದಾಳಿಯ ಸಂದರ್ಭದಲ್ಲಿ:

ಆನ್‌ಲೈನ್ ಕಿರುಕುಳದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಕುರಿತ ಹೆಚ್ಚಿನ ವಿವರವಾದ ಮಾಹಿತಿಗಳಿಗಾಗಿ ಸಿಪಿಜೆಯ ಸಂಪನ್ಮೂಲಗಳನ್ನು ಓದಿ.

ದೈಹಿಕ ಸುರಕ್ಷೆ: ಸಭೆಗಳು ಮತ್ತು ಪ್ರತಿಭಟನೆಗಳನ್ನು ಸುರಕ್ಷಿತವಾಗಿ ವರದಿ ಮಾಡುವುದು

ಚುನಾವಣೆಗಳ ಸಂದರ್ಭದಲ್ಲಿ ಪತ್ರಕರ್ತರು ಹೆಚ್ಚಾಗಿ ಸಾರ್ವಜನಿಕ ಸಭೆಗಳು, ಪ್ರಚಾರ ಸಭೆಗಳು, ಲೈವ್ ಪ್ರಸಾರ ಮತ್ತು ಪ್ರತಿಭಟನೆಗಳಲ್ಲಿ ಜನರ ಗುಂಪುಗಳ ನಡುವೆ ಇದ್ದು ಕೆಲಸ ಮಾಡಬೇಕಾಗುತ್ತದೆ. 

ಅಪಾಯಗಳನ್ನು ಕಡಿಮೆ ಮಾಡಲು:

ರಾಜಕೀಯ ಘಟನೆಗಳು ಮತ್ತು ಸಭೆಗಳು
ಪ್ರತಿಭಟನೆಗಳು

ಪ್ರತಿಭಟನೆಗಳನ್ನು ವರದಿ ಮಾಡುವಾಗ ಅಪಾಯವನ್ನು ಕಡಿಮೆ ಮಾಡಲು:

ಅಶ್ರುವಾಯು ಎದುರಿಸುವಾಗ ಅಪಾಯವನ್ನು ಕಡಿಮೆ ಮಾಡಲು:

ದೈಹಿಕ ಸುರಕ್ಷೆ: ದ್ವೇಷಕಾರಿ ಸಮುದಾಯದಲ್ಲಿ ವರದಿ ಮಾಡುವುದು

ಮಾಧ್ಯಮ ಅಥವಾ ಹೊರಗಿನವರ ಕುರಿತು ದ್ವೇಷಕಾರಿಯಾಗಿರುವ ಪ್ರದೇಶ ಆಥವಾ ಸಮುದಾಯದಿಂದ ಪತ್ರಕರ್ತರು ಆಗಾಗ ವರದಿ ಮಾಡಬೇಕಾಗುತ್ತದೆ. ಮಾಧ್ಯಮಗಳು ತಮ್ಮ ಹಿತಾಸಕ್ತಿಗಳನ್ನು ನ್ಯಾಯಯುತವಾಗಿ ಪ್ರತಿನಿಧಿಸುತ್ತಲ್ಲ ಅಥವಾ ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತದೆ ಎಂದು ಒಂದು ಸಮುದಾಯವು ಭಾವಿಸಿದಾಗ ಇದು ನಡೆಯಬಹುದು. ಚುನಾವಣೆಗಳ ಸಂದರ್ಭದಲ್ಲಿ ಪತ್ರಕರ್ತರು ದೀರ್ಘಕಾಲ ಅಂತಹ ಸಮುದಾಯಗಳ ನಡುವೆ ಕೆಲಸಮಾಡಬೇಕಾಗಿ ಬರುತ್ತದೆ.

ಅಪಾಯವನ್ನುಕಡಿಮೆಮಾಡಲು:

  • ನಿಮ್ಮ ವಾಹನವನ್ನು ತುರ್ತಾಗಿ ಹೋಗಲು ಸಾಧ್ಯವಾಗುವ ಹಾಗೆ ನಿಲ್ಲಿಸಿ. ಚಾಲಕ ವಾಹನದಲ್ಲೇ ಸಿದ್ಧವಾಗಿ ಇದ್ದರೆ ಒಳ್ಳೆಯದು.
  • ನೀವು ನಿಮ್ಮ ವಾಹನದಿಂದ ದೂರವಾಗಿ ಕೆಲಸ ಮಾಡಬೇಕಾಗಿದ್ದರೆ, ಅದಿರುವಲ್ಲಿಗೆ ಮರಳುವುದು ಹೇಗೆ ಎಂದು ತಿಳಿದಿರಿ. ಹೆಗ್ಗುರುತುಗಳನ್ನು ಗಮನಿಸಿ, ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ. 
  • ವೈದ್ಯಕೀಯ ತುರ್ತು ಸಂದರ್ಭದಲ್ಲಿ ಎಲ್ಲಿಗೆ ಹೋಗಬೇಕು ಎಂದು ತಿಳಿದಿರಿ ಮತ್ತು ಒಂದು ನಿರಾಗಮನ ಕಾರ್ಯತಂತ್ರ ರೂಪಿಸಿ.
ನವೆಂಬರ್ 7, 2023ರಂದು ಮಣಿಪುರದ ಇಂಫಾಲ್‌ನಲ್ಲಿ ಪ್ರತಿಸ್ಪರ್ಧಿ ಆದಿವಾಸಿಗಳ ನಡುವೆ ಗುಂಡಿನ ಚಕಮಕಿ ನಡೆಯುವ ಸ್ಥಳಕ್ಕೆ ಹೋಗದಂತೆ ಸೇನಾ ವಾಹನವನ್ನು ತಡೆಯುತ್ತಿರುವ ಮೀಟೀ ಸಮುದಾಯದ ನಿವಾಸಿಗಳು. ರಾಯ್ಟರ್ಸ್/ ಸ್ಥಳೀಯ ವರದಿಗಾರ

ಮಾನಸಿಕ ಸುರಕ್ಷೆ: ಸುದ್ದಿಯನೆಯ ಆಘಾತ, ಆತಂಕಗಳ ನಿರ್ವಹಣೆ

ಸುದ್ದಿಗಳು ಮತ್ತು ಪರಿಸ್ಥಿತಿಗಳು ಆಗಾಗ ಆಘಾತ ಮತ್ತು ಆತಂಕಗಳನ್ನು ಉಂಟುಮಾಡುತ್ತವೆ. ನೀವು ಈ ಒತ್ತಡ ಮತ್ತು ಆತಂಕಗಳನ್ನು ಕುರಿತು ಯೋಚಿಸುವಾಗ ಇವುಗಳನ್ನು ಪರಿಗಣಿಸಿ:

ಇಂತಹಾ ದಿನಗಳಲ್ಲಿ ಸಂಸ್ಥೆಯ ಆಡಳಿತವು ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಮತ್ತು ಕಾಳಜಿಯ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೆಳಗಿನ ಹಾದಿಯನ್ನು ಪರಿಗಣಿಸಿ, ಅಗತ್ಯ ಬಿದ್ದರೆ ಅದರಂತೆ ಕ್ರಮ ಕೈಗೊಳ್ಳಬೇಕು. ಎಷ್ಟರ ಮಟ್ಟಿಗೆ ಮಾರ್ಗದರ್ಶನವನ್ನು ಅನುಸರಿಸಬೇಕು ಎಂಬುದು ಘಟನೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ.

ಅಂತಹಾ ದಿನಗಳಲ್ಲಿ:

ಮಾನಸಿಕ ಸುರಕ್ಷೆ: ಆಘಾತ ಅಥವಾ ಯಾತನೆ ಸಂಬಂಧಿ ಒತ್ತಡ ನಿರ್ವಹಣೆ

ಆಘಾತೋತ್ತರ ಒತ್ತಡ ಕಾಯಿಲೆ (Post-traumatic stress disorder- PTSD) ಎಂಬುದು ಆತಂಕಕಾರಿ ವಿಷಯಗಳ ಕುರಿತು ವರದಿ ಮಾಡುವ ಪತ್ರಕರ್ತರು ಎದುರಿಸುತ್ತಿರುವ ಒಂದು ಸಮಸ್ಯೆ ಎಂದು ಇಂದು ಹೆಚ್ಚುಹೆಚ್ಚಾಗಿ ಒಪ್ಪಿಕೊಳ್ಳಲಾಗುತ್ತಿದೆ.

ಸಾಂಪ್ರದಾಯಿಕವಾಗಿ ಈ ಸಮಸ್ಯೆಯನ್ನು ಯುದ್ಧ ಅಥವಾ ಸಂಘರ್ಷ ವಲಯಗಳಲ್ಲಿ ಕೆಲಸ ಮಾಡುವ ಅಥವಾ ಹೆಚ್ಚುಕಡಿಮೆ ಸಾವಿಗೆ ಹತ್ತಿರದ ಪರಿಸ್ಥಿತಿ ಎದುರಿಸಿ ಪಾರಾದ ಅಥವಾ ತೀರಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಗಳ ಜೊತೆ ಮಾತ್ರ ಸಮೀಕರಿಸಲಾಗುತ್ತದೆ. ಆದರೆ, ಇತ್ತೀಚೆಗೆ ಯಾವುದೇ ಆತಂಕಕಾರಿ ವಿಷಯದ ಮೇಲೆ ಕೆಲಸ ಮಾಡುವ ಪತ್ರಕರ್ತರು ಕೂಡಾ ಪಿಟಿಎಸ್‌ಡಿ ಲಕ್ಷಣಗಳನ್ನು ಅನುಭವಿಸುತ್ತಿರುವ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ. ಶೋಷಣೆ ಅಥವಾ ಹಿಂಸಾಚಾರದ ವರದಿಗಳು (ಆಪರಾಧ ಸ್ಥಳದ ವರದಿಗಾರಿಕೆ, ಕ್ರಿಮಿನಲ್ ಕೋರ್ಟ್ ವಿಚಾರಣೆಗಳು ಅಥವಾ ಹಿಂಸಾತ್ಮಕ ದರೋಡೆ) ಅಥವಾ ದೊಡ್ಡ ಪ್ರಮಾಣದಲ್ಲಿ ಸಾವು ನೋವುಗಳನ್ನು ಉಂಟುಮಾಡುವ ಘಟನೆಗಳು (ರೈಲು, ವಾನ ಅಪಘಾತ/ ಗಣಿ ಕುಸಿತ) ಇತ್ಯಾದಿಗಳು ಕೂಡಾ ಅವುಗಳನ್ನು ವರದಿ ಮಾಡುವ ಪತ್ರಕರ್ತರಲ್ಲಿ ಆಘಾತ, ಆತಂಕ ಉಂಟುಮಾಡುವ ಸಾಧ್ಯತೆ ಇದೆ. ಆನ್‌ಲೈನ್‌ನಲ್ಲಿ ಕಿರುಕುಳ, ನಿಂದನೆ, ಬೆದರಿಕೆ, ಟ್ರೋಲ್‌ಗೆ ಒಳಗಾದವರು ಕೂಡಾ ಒತ್ತಡ ಸಂಬಂದಿ ಯಾತನೆಗೆ ಗುರಿಯಾಗಬಹುದು.

ಯಾವುದೇ ಸೆನ್ಸಾರ್ ಇಲ್ಲದ ಬಳಕೆದಾರರೇ ಹಾಕಿರುವ ವಿಷಯಗಳು ಡಿಜಿಟಲ್ ಕ್ಷೇತ್ರದಲ್ಲಿ ಬೆಳೆದು ಮುಂಚೂಣಿಗೆ ಬರುತ್ತಿವೆ. ಸದಾ ಸಾವು ನೋವಿನ ಭಯಾನಕ ಚಿತ್ರಗಳನ್ನು ನೋಡುತ್ತಿರುವ ಪತ್ರಕರ್ತರು ಮತ್ತು ಸಂಕಲನಕಾರರು ಈಗ ವಿಕೇರಿಯಸ್ ಟ್ರೌಮಾ ಎಂದು ಕರೆಯಲಾಗುವ ದ್ವಿತೀಯ ಹಂತದ ಆಘಾತ ಯಾತನೆಗೆ ಒಳಗಾಗಬಹುದು.

ಭಯಾನಕ ಘಟನೆಗಳು, ಅವುಗಳ ಚಿತಗಳು/ವಿಡಿಯೋ ನೋಡಿದ ಬಳಿಕ ಯಾತನೆ, ಒತ್ತಡಕ್ಕೆ ಗುರಿಯಾಗುವುದು ಒಂದು ಸಹಜ ಮಾನವ ಪ್ರತಿಕ್ರಿಯೆ ಎಂಬುದನ್ನು ಎಲ್ಲಾ ಪತ್ರಕರ್ತರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಎಲ್ಲರಿಗಾಗಿ:

ಸಂಕಲನ ನಿರ್ಮಾಪಕರಿಗೆ:

ಕ್ಷೇತ್ರದಲ್ಲಿರುವ ನಿರ್ಮಾಪಕರಿಗೆ:

ಅದು ವಿಶೇಷವಾಗಿ ತೀವ್ರವಾಗಿದ್ದರೆ:

ನೆರವು ಬೇಕಾದ ಪತ್ರಕರ್ತರು emergencies@cpj.orgಮೂಲಕ ಅಥವಾ ಸಿಪಿಜೆಯ ಭಾರತೀಯ ಪ್ರತಿನಿಧಿ ಕುಣಾಲ್ ಮುಜುಮ್ದಾರ್ kmajumder@cpj.org. ಮೂಲಕ ಸಿಪಿಜೆ ತುರ್ತು ವಿಭಾಗದ ನೆರವು ಪಡೆಯಬಹುದು. ಚುನಾವಣೆಗಳ ಸಮಯದಲ್ಲಿ ಪತ್ರಕರ್ತರ ಸುರಕ್ಷಿತತೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Journalist Safety: Electionsಗೆ ಭೇಟಿಕೊಡಿ.

Exit mobile version